ನೇತ್ರಾವತಿ

ನೇತ್ರಾವತಿ ಮೈ ತುಂಬಿಕೊಂಡ
ಕರಿಚಂದ್ರ ಕಾಳ ಸೀರೆ ಎಲ್ಲೆಲ್ಲೂ
ನಾನೀ ನೂಲಿನೆಳೆಯ ಕಸೂತಿ
ಅದು ಕರುಳ ಬಳ್ಳಿ ಹಬ್ಬಹರಡಿ
ಮುರಗಿ ಹೆಣಿಕೆಯ ವಂಕಿ ಚಿತ್ತಾರ
ನಡೆಯ ನಾಜೂಕು ಹರವು

ಖುಷಿ ಪ್ರೀತಿಯ ಕುಸುರಿ ಕಣ್ಣರಳಿ
ಮದುವೆ ಮನೆ ಕೋಮಲ ಎಳೆಹಾಸು
ಮೃದು ಮನದ ಅಲೆಗಳ ತರಂಗ
ಮೌನ ಅಭಿವ್ಯಕ್ತಿ ಎಲ್ಲೆಲ್ಲೂ ಚಿತ್ರಕಾವ್ಯ
ಹಸಿರು ಬಟ್ಟೆಯ ಆಲಯ ಹಸಿರು.

ಬೆಳಕ ಪ್ರಭೆಯ ಝಳು ಝಳು ಕನ್ನಡಿ
ಪ್ರತಿಫಲಿಸಿತು ವಿಕಸಿದ ಸಾಕ್ಷೀ ಬೀಜಗಳು
ಭೂಮಿ ಗರ್ಭದಲ್ಲಿ ಮೊಳಕೆಯ ಚಿಗುರು
ಋತುಗಾನದ ಕೊಳಲು ನಿನಾದ
ಆತ್ಮಬೇರುಗಳಲ್ಲಿ ಇಳಿದ ತಂಪು ಕಂಪನಗಳು.

ನಿನಾದದಲಿ ಸುಗಮ ಬದುಕು
ಹರಿದ ಲಯ ಕರುಣೆ ಪ್ರೀತಿ
ಒಳಗೂ ಹೊರಗು ಚಿಗುರ ಚಿಮ್ಮಿ
ಹೂವು ಹಣ್ಣು ಕಾಯಿ ಸ್ಪರ್ಶ ಚಿಟ್ಟೆ
ಬಟ್ಟ ಬಯಲು ಗಾಳಿಗೆ ಹಾರಿದ ಪಟ
ನೇತ್ರಾವತಿ ಅಮ್ಮ ಹೆಂಡತಿ ಮಗಳಾಗಿ ಹರಿದಳುಭವದಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಂಥನ
Next post ಪರಿವರ್ತನೆ

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

cheap jordans|wholesale air max|wholesale jordans|wholesale jewelry|wholesale jerseys